“ಸಾಧಕರ ಸಂಸ್ಮರಣೆ ಸಭ್ಯ ಸಮಾಜದ ಕರ್ತವ್ಯ” : ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜೂನ್ 3 , 2015
|
ಜೂನ್ 3, 2015
|
“ಸಾಧಕರ ಸಂಸ್ಮರಣೆ ಸಭ್ಯ ಸಮಾಜದ ಕರ್ತವ್ಯ” : ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟಿ
ಮಂದಾರ್ತಿ :
“ಸಮಾಜದಲ್ಲಿ ಉನ್ನತವಾದ ಸಾಧನೆ ಮಾಡಿದವರನ್ನು ಕಾಲ ಕಾಲಕ್ಕೆ ಸಂಸ್ಮರಣೆ ಮಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಇದು ಭಾರತೀಯ ಸಂಸ್ಕತಿಯ ಲಕ್ಷಣ. ಯಕ್ಷಗಾನ ಮದ್ದಳೆವಾದನದ ಮೂಲಕ ಜನಮನ ತಲುಪಿದ ಮದ್ದಳೆ ಮಾಂತ್ರಿಕ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರ ಸಂಸ್ಮರಣೆ ಈ ಕಾಲಕ್ಕೆ ಔಚಿತ್ಯಪೂರ್ಣವಾಗಿದೆ“ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಮಣಿಪಾಲದ ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟರು ಹೇಳಿದರು. ಅವರು ಮಂದಾರ್ತಿಯಲ್ಲಿ ನೆಡೆದ ಖ್ಯಾತ ಮದ್ದಳೆವಾದಕ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರ ಸಂಸ್ಮರಣ ಸಮಾರಂಭದಲ್ಲಿ ಸಂಸ್ಮರಣಾ ಬಾಷಣ ಮಾಡಿದರು.
ಮಂದಾರ್ತಿ ಶೇಡಿಕೊಡ್ಲು ವಿಠಲ ಶೆಟ್ಟರು ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವರಾಮ ಎಸ್. ಕೇಳ್ಕರ್, ಕುಂಜಾಲು ಶ್ರೀದರ ಶೆಟ್ಟಿ, ಗೋಪಿನಾಥ ಕಾಮತ್ ಸಿದ್ದಾಪುರ, ಅಶೋಕ ಎಲ್ ಕುಂದರ್ ಮಂದಾರ್ತಿ, ಬಾಸ್ಕರ ಗುಂಡಿಬೈಲು ಉಪಸ್ಥಿತರಿದ್ದರು. ನಗರ ಸುಬ್ರಹ್ಮಣ್ಯ ಆಚಾರ್ ಪ್ರಾಸ್ತಾವಿಕ ಮಾತನಾಡಿದರು. ಹುಂಚದಕಟ್ಟೆಯವರ ದರ್ಮಪತ್ನಿ ಯಶೋದಮ್ಮನವರನ್ನು ಸರಸ್ವತಿ ಸುಬ್ರಹ್ಮಣ್ಯ ಅಚಾರ್ ಪಲಪುಷ್ಪ ಸಮರ್ಪಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಅಶೋಕ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಖ್ಯಾತ ಭಾಗವತರ , ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ನೃತ್ಯ ವೈವಿದ್ಯಗಳು ನೆರವೇರಿತು.
|
|
|